ಜಲಮಯ

ಜಲಮಯ

ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ.

ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ.

ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ ಪ್ರಕಾರ ಭವ್ಯ ಭಾರತದಲ್ಲಿ ನೀರಿನ ಲಭ್ಯತೆ ೧೮೬೯ ಶತಕೋಟಿ ಕ್ಯೂಬಿಕ್ (ಟಿಸಿ‌ಎಂ) ಮೀಟರ್‌ನಷ್ಟಿದೆ.

ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ೧೧೨೩ ಟಿಸಿ‌ಎಂ ಮಾತ್ರವೆಂಬ ಆತಂಕಕಾರಿ ವಿಷಯವನ್ನು ಬಯಲು ಮಾಡಿದೆ.

ದಿನೇದಿನೇ ನೀರಿನ ಬೇಡಿಕೆಗೆ ಹೋಲಿಸಿದರೆ ಈ ನೀರು ಎಲ್ಲಿಗೂ ಸಾಕಾಗದೆಂದು ಸಚಿವರು ಸದನದಲ್ಲಿ ಹೇಳಿರುವರು.

ಹೌದು! ಈಗೀಗ ಕೆರೆ, ಬಾವಿ, ಆಣೆಕಟ್ಟು, ಹಳ್ಳಕೊಳ್ಳ ಜಲಾಶಯಗಳೆಲ್ಲ ಬತ್ತಿ ಹೋಗಿ ಬೋರುಗಳು ೧,೦೦೦ ಅಡಿ ಆಳಕ್ಕೊದರೂ ನೀರಿನ ಒರತೆಯಿಲ್ಲ! ಇನ್ನು ಹತ್ತು ವರ್ಷ ಕಳೆದರೆ, ಭವ್ಯ ಭಾರತದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ..!

೨೦೨೫ರ ವೇಳೆಗೆ ದೇಶದ ಎಲ್ಲಾ ಜಲಮೂಲಗಳನ್ನು ಒಟ್ಟು ಗೂಡಿಸಿದರೂ ಭವ್ಯ ಭಾರತದ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಸರ್ಕಾರವೇ ಈ ಆಘಾತಕಾರಿ ವಿಷಯವನ್ನು ಖಚಿತ ಪಡಿಸಿದೆ. ಸಂಶೋಧನಾ ವರದಿಯೊಂದನ್ನು ಆಧರಿಸಿ ಜಲಕೇಂದ್ರ ಸಂಪನ್ಮೂಲ ಸಹಾಯಕ ಸಚಿವ ಸನ್ವರ್‌ಲಾಲ್‌ ಲೋಕಸಭೆಗೆ ಈ ಕುರಿತು ವಿವರ ನೀಡಿ ದೇಶವನ್ನು ತಲ್ಲಣಗೊಳಿಸಿರುವರು.

ಆದ್ದರಿಂದ ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಇಂತಹ ಕ್ರಮಗಳಿಗೆ ಮತ್ತಷ್ಟು ಬೆಂಬಲ ನೀಡುವುದೆಂದು ಸಚಿವರು ಈಗಾಗಲೇ ಖಚಿತಪಡಿಸಿರುವರು.

ಆದ್ದರಿಂದ ಪ್ರತಿ ಹಳ್ಳಿ, ತಾಲ್ಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲೇ ಬೇಕು. ಇರುವ ನೀರನ್ನು ಹಾಲಿನಂತೆ ಜೇನ ಹನಿಯಂತೆ… ತುಪ್ಪದಂತೆ ಖರ್ಚು ಮಾಡುವುದನ್ನು ಎಲ್ಲರೂ ಇನ್ನಾದರೂ ರೂಢಿಸಿಕೊಂಡರೆ ಒಳಿತು ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಡಿಯುವ ನೀರು
Next post ಅತಿಯಾಗಿ ಬಿಗಿಯದಿರೋ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys